_[###]

About (ನಮ್ಮ ಬಗ್ಗೆ)


ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ (ರಿ.) ಪದ್ಮುಂಜ.
ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪದ್ಮುಂಜದಲ್ಲಿ ಫೆಬ್ರವರಿ 11, 2016 ರಲ್ಲಿ ಸ್ಥಾಪನೆಗೊಂಡ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ (ರಿ.) ಭಾರತ ಸರಕಾರದ ಎಮ್.ಎಸ್.ಎಮ್.  ಅಡಿಯಲ್ಲಿ ನೋಂದಾಯಿಸಲ್ಪಟ್ಟಿದೆ(Reg No: KR11D0004600) ತನ್ನ ವಿಶಿಷ್ಟ ಕಂಪ್ಯೂಟರ್ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳ ಕಂಪ್ಯೂಟರ್ ಶಿಕ್ಷಣ ಅಭಿವೃದ್ಧಿಗೆ ಒಂದು ಜವಾಬ್ದಾರಿಯುತ ಸೇವೆಯನ್ನು ನೀಡುತ್ತಿದೆ.
ಕೋರ್ಸ್ಗಳು:
ಬೇಸಿಕ್ ಕಂಪ್ಯೂಟರ್, ಡಿಟಿಪಿ, ಡಿಡಿಟಿಪಿ, ಪಿಜಿಡಿಸಿಎ, ಡಿಸಿಎಂ, ಡಿಓಎಮ್ ಕೋರ್ಸ್ಗಳಲ್ಲದೆ, ಮಲ್ಟಿಮೀಡಿಯಾ ಕೋರ್ಸ್ಗಳಾದ ಫೋಟೋ ಎಡಿಟಿಂಗ್, ಆಡಿಯೋ ಎಡಿಟಿಂಗ್ ಹಾಗೂ ವೀಡಿಯೋ ಎಡಿಟಿಂಗ್ ನ್ನು ಸಹ ವಿಶೇಷವಾಗಿ ಕಲಿಸಲಾಗುತ್ತದೆ.

ಸಿಬ್ಬಂದಿ ಹಾಗೂ ಸಲಹೆಗಾರರು:
ಕುಮಾರೇಶ್ ಕಣಿಯೂರು ಸಂಸ್ಥೆಯ  ಸಂಸ್ಥಾಪಕರಾಗಿ ಹಾಗು ವ್ಯವಸ್ಥಾಪಕ ನಿರ್ದೇಶಕರಾಗಿಲಾವಣ್ಯ ಕಂಪ್ಯೂಟರ್ ಶಿಕ್ಷಕಿಯಾಗಿ, 
ಸುರೇಶ್ ಹಾಗೂ ನಂದೇಶ್ Financial  ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಆಶಾಲಕ್ಷ್ಮಿ, ಶಿವಕುಮಾರ್ಆರ್ಜೆ ಅಭಿಶೇಕ್ , ಮಂಜುನಾಥ್ಹಾಗೂ ಲೋಕೇಶ್ ಸಾಂಸ್ಕೃತಿಕಾ ವಿಭಾಗದ ಮೇಲ್ವಿಚಾರಕರಾಗಿದ್ದಾರೆ.

ಅಂಗ ಸಂಸ್ಥೆಗಳು:
ಇನಿಹಾ ನೆಟ್ಕಂಪ್ಯೂಟರ್ಎಜುಕೇಶನ್ಸಂಸ್ಥೆಯು 4 ಅಂಗ ಸಂಸ್ಥೆಗಳನ್ನು ಹೊಂದಿದೆ.

ತರಬೇತಿ ವಿಧಾನ:
ಕಂಪ್ಯೂಟರ್ ತರಬೇತಿಯನ್ನು ಇಂಟರ್ನೆಟ್ ಸಂಪರ್ಕದೊಂದಿಗೆ ಟಾಸ್ಕ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ಕಂಪ್ಯೂಟರ್ ಕಲಿಕೆಯ ಪ್ರತೀ ಹಂತದಲ್ಲೂ ಇಂಟರ್ನೆಟ್‌”  ಸಹಾಯದೊಂದಿಗೆ ಕಲಿಸಿಕೊಡಲಾಗುತ್ತದೆ.

ಸಂಸ್ಥೆ ಆಯೋಜಿಸಿರುವ ಸಾಂಸ್ಕೃತಿಕಾ ವಿಶೇಷ ಕಾರ್ಯಕ್ರಮಗಳು:
ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ ಕಂಪ್ಯೂಟರ್ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಗಳಿಗೂ ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರೇಶ್‌ ರವರು ಈ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆ-ನಿರ್ದೇಶನವನ್ನು ಮಾಡುತ್ತಿದ್ದಾರೆ.

2017 ಮಾಚ್ 22 ರಂದು ಇನಿಹಾ ನೆಟ್ ವಿದ್ಯಾರ್ಥಿನಿಯರಾದ ಅಕ್ಷತಾ, ಮೇಘಶ್ರೀ, ಧನ್ಯ ರಮ್ಯ ಮತ್ತು ಯಶಸ್ವಿ  ಪ್ರೇರಣಾ ಬಿಂಬ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಾಗೆ 2018 ಜನವರಿ 16 ರಂದು ಬಣ್ಣದ ಬೃಂದಾವನ ಎನ್ನುವ ವಿಶೇಷ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಜಯಶ್ರೀ, ಅನುಶ್ರೀ ಮತ್ತು ಅಶ್ವಿತಾ ರೇಡಿಯೋ ಸಾರಂಗ್ 107.8ಎಫ್ಎಮ್ ನಲ್ಲಿ ನೀಡಿರುತ್ತಾರೆ ಮತ್ತು ರೇಡಿಯೋ ಸಾರಂಗ್ ಸಹಯೋಗದಲ್ಲಿ ದಿನಾಂಕ 22 ಮೇ 2018 ರಂದು  "ಚಿತ್ತ ವಿಸ್ತಾರ (ಭಾರತೀಯ ಯೋಧರಿಗೆ ನಮನ)" ವಿಶೇಷ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದಪ್ರಾರ್ಥನಾ, ಲಾವಣ್ಯ ಕೆ ರಾವ್ ಮತ್ತು ದಿಶಾ ಹೆಚ್.ವಿನಡೆಸಿಕೊಟ್ಟಿರುತ್ತಾರೆಅಲ್ಲದೇ ದಿನಾಂಕ 05-03-2019 ರಂದು ಕಾರ್ಗಿಲ್ಯುದ್ಧದಲ್ಲಿ ಭಾಗವಹಿಸಿದ್ದ ಯೋಧ "ಹವಿಲ್ದಾರ್ರೋಹಿತ್ಕುಮಾರ್‌" ಅವರ ಉಪಸ್ಥಿತಿಯಲ್ಲಿ ನಮ್ಮ ವಿದ್ಯಾರ್ಥಿಗಳಾದ "ಜಯಂತಿ, ಪ್ರಾರ್ಥನಾ, ನಮೃತಾ, ನಿಶಾ, ಶ್ರದ್ಧಾ ಹಾಗೂ ಪೂರ್ವಿಕಾ"ಟೈಮ್ಆಫ್ಟಾರ್ಗೆಟ್‌" ಎನ್ನುವ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಟ್ಟಿರುತ್ತಾರೆ

ಮುಂದಿನ ವರ್ಷ ಬಹು ನಿರೀಕ್ಷಿತ "ಕಾಳಗುತ್ತು" ಎನ್ನುವ ಪತ್ತೇದಾರಿ ಕಿರು ಚಿತ್ರ ತೆರೆಕಾಣಲಿದ್ದು ಸಂಸ್ಥೆಯ ವಿದ್ಯಾರ್ಥಿಗಳಾದ ಚಿತ್ತರಂಜನ್‌, ಆಶಾಲಕ್ಷ್ಮಿ, ಶರತ್‌ ಪಟೆಗಾರ್‌ ಹಾಗೂ ಮೋಕ್ಷಿತ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಂಸ್ಥೆಯ ಇತರೆ ಕಾರ್ಯಕ್ರಮಗಳು:
* ಮಂಗಳೂರಿನ ಪುರಭವನದಲ್ಲಿ ದಿನಾಂಕ 09-02-2017 ರಂದು ನಡೆದ ಟೀಂ ಬ್ಲ್ಯಾಕ್ ಆಂಡ್ ವೈಟ್ ಮಂಗಳೂರು” ಆಯೋಜನೆಯ ಹಾಡು ಹುಟ್ಟುವ ಸಮಯ ಮತ್ತು ದಿನಾಂಕ 20-08-2017 ರಂದು ನಡೆದ ಅಮರ್ ಜವಾನ್ ದಕ್ಷಿಣ ಕನ್ನಡ ಹುತಾತ್ಮ ವೀರಯೋಧರಿಗೆ ನಮನ ಕಾರ್ಯಕ್ರಮಕ್ಕೆ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯೂ ಸಹಕಾರವನ್ನು ನೀಡಿರುತ್ತದೆ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ದಿನಾಂಕ 22-06-2018 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಘಟಕ ಆಯೋಜಿಸಿದ್ದ"ಸ್ವಚ್ಛತಾ ಘೋಷವಾಕ್ಯ" ಸ್ಪರ್ಧೆಯಲ್ಲಿ ನಮ್ಮ  ಸಂಸ್ಥೆಯ ವಿದ್ಯಾರ್ಥಿನಿ "ಜಯಶ್ರೀ" ಪ್ರಥಮ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿಯನ್ನು ತಂದುಕೊಟ್ಟಿರುತ್ತಾಳೆ.

* ದಿನಾಂಕ 11-09-2018 ರಂದು ರೇಡಿಯೋ ಸಾರಂಗ್ "ಆಡು ಆಟ ಆಡು ನೇರ ಪೋನ್ಇನ್ಕಾರ್ಯಕ್ರಮದಲ್ಲಿಇನಿಹಾ ನೆಟ್ಕಂಪ್ಯೂಟರ್ಎಜುಕೇಶನ್ಸಂಸ್ಥೆಯ ವಿದ್ಯಾರ್ಥಿನಿಯಾದ ನೀಶಾ, ಶ್ರದ್ಧಾ ಮತ್ತು ಪೂರ್ವಿಕಾ ಭಾಗವಹಿಸಿ ಕೇಳುಗರಿಗೆ ಮನೋರಂಜನೆಯನ್ನು ನೀಡಿರುತ್ತಾರೆ.

*
ದಿನಾಂಕ 13-01-2019 ರಂದು ಸ್ಥಳೀಯ ಕೈಗಾರಿಕೆ "ರೈತಬಂಧು ಆಹಾರೋಧ್ಯಮ" ಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕೈಗಾರಿಕೆಯ ಕಾರ್ಯ ವಿಧಾನವನ್ನು ಸಂಪೂರ್ಣವಾಗಿ ತೋರಿಸಲಾಗಿತ್ತು. ಭೇಟಿಯಲ್ಲಿ ರೈತಬಂಧು ಆಹಾರೋಧ್ಯಮದ ಮಾಲಕರಾದ "ಶ್ರೀ ಶಿವಶಂಕರ್ನಾಯಕ್‌" ಹಾಗೂ ಅಲ್ಲಿನ ಸಿಬ್ಬಂಧಿ ನಮ್ಮ ವಿದ್ಯಾರ್ಥಿಗಳಿಗೆ ವಿವರವಾಗಿ ಮಾಹಿತಿ ನೀಡಿದ್ದರು.

ವಾರ್ಷಿಕ ಶೈಕ್ಷಣಿಕ ಪ್ರವಾಸ:
ವಾರ್ಷಿಕವಾಗಿ ವಿದ್ಯಾರ್ಥಿಗಳ ಜೊತೆ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲಾಗುತ್ತದೆಪ್ರವಾಸದಲ್ಲಿ ವಿದ್ಯಾರ್ಥಿಗಳ ಪೋಷಕರೂ ಭಾಗವಹಿಸುತ್ತಾರೆ.

* 2016 ಅಕ್ಟೋಬರ್ 23 ರಂದು ಚಿತ್ರದುರ್ಗಕ್ಕೆ ಶೈಕ್ಷಣಿಕ ಪ್ರವಾಸವನ್ನು ಕೈಗೊಂಡುಚಿತ್ರರ್ದು ಕೋಟೆ, ಆಡುಮಲೇಶ್ವರ, ಚಂದ್ರವಳ್ಳಿ, ವಾಣಿವಿಲಾಸ್ ಸಾಗರ, ಹಾಲುಮಲೇಶ್ವರ ಪ್ರದೇಶಗಳಿಗೆ ಬೇಟಿ ನೀಡಲಾಗಿದೆ.

* 2017 ನವೆಂಬರ್ 26 ರಂದು ಶಿವಮೊಗ್ಗ-ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡುಜೋಗ್ಫಾಲ್ಸ್, ಬನವಾಸಿ, ಶಿರಸಿ, ಯಾಣ ಮತ್ತು ಮುರುಡೇಶ್ವರ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿದೆ. ಪ್ರವಾಸದಲ್ಲಿ ಕನ್ನಡ ಕಿರುತೆರೆ ನಟಿ ಹರಿಣಿ ವಿಶೇಷ ಅಥಿತಿಯಾಗಿ ಆಗಮಿಸಿದ್ದರು.

* 2018 ನವೆಂಬರ್‌ 25 ಕ್ಕೆ ಶೃಂಗೇರಿ, ಕುಪ್ಪಳ್ಳಿ, ತೀರ್ಥಹಳ್ಳಿ, ಕುಂದಾಪುರ ಸ್ಥಳಗಳಿಗೆ ಪ್ರವಾಸವನ್ನು ಆಯೋಜಿಸಲಾಗಿದೆ
* 2019 ನವೆಂಬರ್‌ 24 ಕ್ಕೆ ತುಮಕೂರು ಜಿಲ್ಲೆಗೆ ಪ್ರವಾಸ ಕೈಗೊಂಡು, ಮಧುಗಿರಿ, ಚೆನ್ನರಾಯನ ದುರ್ಗಾ, ದೇವರಾಯನ ದುರ್ಗ, ನಾಮದ ಚಿಲುಮೆ, ಮಂದಾರಗಿರಿ, ಕೈದಾಳ ಹಾಗೂ ಸಿದ್ದಗಂಗಾ ಮಠ ಕ್ಕೆ ಬೇಟಿ ನೀಡಲಾಗಿದೆ.

ಇನಿಹಾ ಕಿಡ್‌ ಮಾಡೇಲ್‌ ಅವಾರ್ಡ್‌
ಇನಿಹಾ ನೆಟ್‌ ಸಂಸ್ಥೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ "ಕಿಡ್‌ ಮಾಡೆಲ್‌ ಅವಾರ್ಡ್‌" ಸಹ ಒಂದಾಗಿದೆ. ಪ್ರತೀ 2 ವರ್ಷಕ್ಕೊಮ್ಮೆ ನಡೆಯುವ ಈ ಕಿಡ್‌ ಮಾಡೆಲ್‌ ಅವಾರ್ಡ್‌ನಲ್ಲಿ ಜಿಲ್ಲೆಯ ಪುಟಾಣಿ ಮಕ್ಕಳು ಭಾಗವಹಿಸುತ್ತಾರೆ. 
2016 ರಲ್ಲಿ ಕಾರ್ಕಳದ ಸುನೀಲ್‌ ಕೋಟ್ಯಾನ್‌ ಹಾಗೂ ಪೂರ್ಣಿಮಾ ದಂಪತಿಯ ಪುತ್ರಿ "ಸ್ಪೂರ್ತಿ" ಕಿಡ್‌ ಮಾಡೆಲ್‌ ಆಗಿ ಆಯ್ಕೆಯಾದರೆ, 2018 ರಲ್ಲಿ ವಿಟ್ಲದ ಜತ್ತಪ್ಪ ಗೌಡ ಹಾಗೂ ಸವಿತಾ ದಂಪತಿಯ ಪುತ್ರಿ "ಶ್ರದ್ಧಾ" ಆಯ್ಕೆಯಾಗಿದ್ದಾಳೆ. ಪ್ರಸ್ತುತ 2020 ರ ಕಿಡ್‌ ಮಾಡೆಲ್‌ ಆಗಿ ಬೆಳ್ತಂಗಡಿ ತಾಲೂಕು ಕುಕ್ಕಾವು ಇಲ್ಲಿನ ನಿಶ್ಮಿತಾ ಇವರ ಪುತ್ರಿ "ಸನ್ಮಿತಾ" ಆಯ್ಕೆಯಾಗಿದ್ದಾಳೆ.

ಸಂಸ್ಥೆಯಿಂದ ನೀಡಲಾದ ವಿಶೇಷ ಯೋಜನೆ
ಸ್ಥಳಿಯವಾಗಿರುವ ಸರಕಾರಿ ಪ್ರೌಢಶಾಲೆ ಪದ್ಮುಂಜ ಇಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಬ್ಬರಿಗೆ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯಿಂದ ಡಿ.ಸಿ. ಕೋರ್ಸ್ನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು ಉಳಿದ ಹೆಚ್ಚು ಅಂಕ ಪಡೆದವರಿಗೆ ಅಭಿನಂದನೆಯನ್ನು ಸಲ್ಲಿಸಲಾಗುತ್ತದೆ.

ಹೀಗೆ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ ಕಂಪ್ಯೂಟರ್ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗಳಿಗೂ ವಿಶೇಷ ಮಾನ್ಯತೆಯನ್ನು ನೀಡುತ್ತಾ ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಾ ಎಲ್ಲರ ವಿಶ್ವಾಸಕ್ಕೆ ಅಭಿಮಾನಕ್ಕೆ ಪಾತ್ರವಾಗಿದೆ. ಇದಕ್ಕೆ ಇನಿಹಾ ನೆಟ್ ಸಂಸ್ಥೆ ಆಭಾರಿಯಾಗಿರುತ್ತದೆ. ಮುಂದೆಯೂ ಸಂಸ್ಥೆಯ ಬೆಳವಣಿಗೆಗೆ ಎಲ್ಲರ ಪ್ರೋತ್ಸಾಹ-ಸಹಕಾರ ಹಾಗೆ ಸಲಹೆಗಳನ್ನು ಸಂಸ್ಥೆ ಬಯಸುತ್ತದೆ.