_[###]

ಕಂಪ್ಯೂಟರ್ ಶಿಕ್ಷಣ ಮಾಹಿತಿ ಕಾರ್ಯಗಾರ; ಇನಿಹಾ ನೆಟ್ ಸಂಸ್ಥೆಯ ಪುಟಾಣಿ ವಿದ್ಯಾರ್ಥಿಗಳಿಗೆ ವಿಶೇಷ ಆಟೋಟ

ಸೆ.21: ಇನಿಹಾ ನೆಟ್ ಕಂಪ್ಯೂಟರ್ ಸಂಸ್ಥೆ ಹಾಗೂ ಗ್ರಾಮೋತ್ಥಾನ ಸೇವಾ ಸೆಂಟರ್ ಉರುವಾಲು ಇದರ ಸಹಯೋಗದಲ್ಲಿ ಕಂಪ್ಯೂಟರ್ ಶಿಕ್ಷಣ ಮಾಹಿತಿ ಕಾರ್ಯಗಾರ ಇಂದು ಪದ್ಮುಂಜ ಸಿ.ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಹಾಗೆ ಇನಿಹಾ ನೆಟ್ ಸಂಸ್ಥೆಯ ಪುಟಾಣಿ ವಿದ್ಯಾರ್ಥಿಗಳಿಗೆ ವಿಶೇಷ ಆಟೋಟವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಗ್ರಾಮೋತ್ಥಾನ ಸೇವಾ ಸೆಂಟರ್ ನ ಅಧ್ಯಕ್ಷರಾದ ರವಿಪ್ರಕಾಶ್ ರವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸಿ ಎ ಬ್ಯಾಂಕ್ ಪದ್ಮುಂಜದ ಅಧ್ಯಕ್ಷರಾದ ಶ್ರೀ ರಾಜೀವ ರೈ ಹಾಗೂ ಗ್ರಾಮೋತ್ತಾನ ಸೇವಾ ಸೆಂಟರ್ ನ ಪ್ರೊಗಾಮಿಂಗ್ ಕೋಆಡಿನೇಟರ್ “ದುರ್ಗಾಪ್ರಸಾದ್” ಉಪಸ್ಥಿತರಿದ್ದರು.
ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆದು ಇದೀಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪದ್ಮುಂಜದಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ “ನಯನ ಕುಮಾರಿ” ಇವರಿಗೆ ಹಾಗೂ ಇನಿಹಾ ನೆಟ್ ಸಂಸ್ಥೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ ಹಾಗೂ ಮ್ಯಾನೆಜ್‍ಮೆಂಟ್ ಕೋಆಡಿನೇಟರ್ ಆಗಿ ಕಾರ್ಯನಿರ್ವಹಿಸಿದ್ದ “ಮೇಘಶ್ರೀ” ಇವರಿಗೆ ಸನ್ಮಾನ ಮಾಡಲಾಯಿತು. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಭಾವಚಿತ್ರವನ್ನು ಸ್ಮರಣಿಕೆಯಾಗಿ ನೀಡಲಾಯಿತು.
ಇನಿಹಾ ನೆಟ್ ಸಂಸ್ಥೆಯಿಂದ ಬೀಳ್ಕೊಟ್ಟ ಪುಟಾಣಿ ವಿದ್ಯಾರ್ಥಿಗಳಿಂದ ಇನಿಹಾ ನೆಟ್ ಸಂಸ್ಥೆಗೆ ನೆನಪಿನ ಕಾಣಿಕೆಯನ್ನು ನೀಡಿ ತಮ್ಮ ಅಭಿಮಾನ ಪ್ರೀತಿಯನ್ನು ತೋರಿಸಿದ್ರು.

ಪುಟಾಣಿಗಳನ್ನು ರಂಜಿಸಿದ ಆಟ.

ಇನಿಹಾ ನೆಟ್ ನ ಪುಟಾಣಿ ವಿದ್ಯಾರ್ಥಿಗಳಿಗೆ ವಿಶೇಷ ಆಟೋಟವನ್ನು ನಡೆಸಲಾಯಿತು.
ಬಲೂನ್ ಬ್ಲಾಸ್ಟ್, ಚಕ್ಕುಲಿ ತಿನ್ನುವುದು, ಪಾಸ್ ಕಪ್, ಮ್ಯೂಸಿಕ್ ಚೇರ್, ಬಿಸ್ಕೆಟ್ ತಿನ್ನುವುದು ಮುಂತಾದ ಹಾಸ್ಯ ಮಿಶ್ರಿತ ಆಟಗಳನ್ನು ಆಡಿಸಿ ಮನರಂಜಿಸಲಾಯಿತು.